ಮಂಗಳವಾರ, ನವೆಂಬರ್ 21, 2017

ಸಣ್ಣ ಕಥೆ ೨

ಆಂಗ್ಲರ ಆಳ್ವಿಕೆಯ ಕಾಲ.  ಮುಂಬಯಿಯ ವ್ಯಾಟ್ಸನ್ ಎಂಬ ಭವ್ಯ ಹೋಟೆಲ್ . ಒಂದು ದಿನ  ಆ ಹೋಟೆಲ್  ಗೆ ಬಂದ ಭಾರತೀಯ ಯುವಕನನ್ನು ಮ್ಯಾನೇಜರ್ ತಡೆದುಬಿಟ್ಟ. ಇದು ಬಿಳಿಯರಿಗೆ ಮಾತ್ರ ಕರಿಯರಿಗೆ ಪ್ರವೇಶವಿಲ್ಲ ಎಂದ.   ಆ ಯುವಕನ ಸ್ವಾಭಿಮಾನ  ಜಾಗೃತವಾಯಿತು.  ಇದಕ್ಕಿಂತ   ಭವ್ಯ  ಹೋಟೆಲ್ ಕಟ್ಟುತ್ತೇನೆ.  ಅಲ್ಲಿ ಭಾರತೀಯರಿಗೆ  ಮಾತ್ರವೇ  ಪ್ರವೇಶ,ಬೇರೆಯವರಿಗಿರದು.  ನಿಮ್ಮಂತಹ ಬಿಳಿಯರನ್ನು  ಇಲ್ಲಿ  ಕೆಲಸಕ್ಕಿಟ್ಟುಕೊಳ್ಳುತ್ತೇನೆ  ಎಂದು  ಆತ್ಮ ವಿಶ್ವಾಸದ  ದನಿಯಲ್ಲಿ ಗುಡುಗಿದ .  ಯುವಕನ ಆವೇಶದ ಮಾತು  ಕೇಳಿ ಸುತ್ತಮುತ್ತಲಿದ್ದವರೆಲ್ಲ  ನಕ್ಕುಬಿಟ್ಟರು . ಹತ್ತಿರದ ನೆಂಟರಂತೂ ನಿನ್ನಿಂದ ಸಾಧ್ಯವಾಗದು ಎಂದು ಎಂದು ಅವನನ್ನು ನಿರುತ್ಸಾಹಗೊಳಿಸಿದರು. ಈ ಘಟನೆಯಾದ ಮೇಲೆ ಆ ಯುವಕ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮುಂಬೈಯಿಯ ಪ್ರಮುಖ ಪ್ರದೇಶದಲ್ಲಿ ವಿಸ್ತಾರವಾದ ಸ್ಥಳ ಖರೀದಿಸಿದ. ನೋಡ ನೋಡುತ್ತಿದ್ದಂತೆ ಅತ್ಯಾಧುನಿಕವಾದ ಭವ್ಯ ಹೋಟೆಲ್ ಕಟ್ಟಡ ಅಲ್ಲಿ ತಲೆಯೆತ್ತಿತ್ತು. ಜಗತ್ತಿನ ಪ್ರಸಿದ್ಧ  ತಾಣಗಳಿಂದಲೇ  ತರಿಸಿದ ವಸ್ತುಗಳಿಂದ ಆ ಹೋಟೆಲ್ ನಿರ್ಮಾಣಗೊಂಡಿತ್ತು. ಆ ಕಾಲದಲ್ಲಿ ಜಗತ್ತಿನಲ್ಲಿ ಎಲ್ಲೂ ಕಂಡುಬರದ  ವಿಶಿಷ್ಟ ವಾಸ್ತುಶಿಲ್ಪ ಸ್ವರ್ಗವನ್ನೇ ಧರೆಗಿಳಿಸಿದಂತಹ  ಹೋಟೆಲ್ ಅದಾಗಿತ್ತು ಅದಕ್ಕೆ ಆಗಲೇ ನಾಲ್ಕುವರೆ ಕೋಟಿ  ರೂ . ವೆಚ್ಚವಾಗಿತ್ತು!! 1903 ರಲ್ಲಿ ಈ ವೈಭವದ ಹೋಟೆಲ್ ಆರಂಭವಾಯಿತು. ಅಲ್ಲಿಯ ಆಳುಕಾಳುಗಳು  ವಿದೇಶಿಗರು! ಅಲ್ಲಿನ ಗ್ರಾಹಕ ಪ್ರಭುಗಳು  ಭಾರತೀಯರು!    ಆ ಹೊಟೇಲೇ ತಾಜ್ ಹೋಟೆಲ್. ಅದರ ರೂವಾರಿ ಜಮಶೇಡ್ಜಿ ನಸರ್ವಾನ್ ಜಿ  ಟಾಟಾ.  ವ್ಯಾಟ್ಸನ್ ಹೋಟೆಲ್ ಗೆ  ಪ್ರವೇಶ ನೀಡದೇ ಆಂಗ್ಲರು ಮಾಡಿದ ಅವಮಾನದ ಸೇಡನ್ನು ಈ ರೀತಿ ಆತ ತೀರಿಸಿಕೊಂಡಿದ್ದ . ವೈಭವಕ್ಕೆ ಹೆಸರಾದ ತಾಜ್ ಹೋಟೆಲ್ ನ ಶಾಖೆಗಳು ಇಂದು ಇಶ್ವದಲ್ಲೆಲ್ಲ ಹರಡಿವೆ. ಲಾಭದ ಶೇ.60 ರಷ್ಟನ್ನು ಬಾಂಬೆ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ವಿನಿಯೋಗಿಸಲಾಗುತ್ತಿದೆ.


                       ಆತ್ಮವಿಶ್ವಾಸ  ಇದ್ದವನು  ಏನನ್ನೂ ಮಾಡಬಲ್ಲ ㉈


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಂಗಳೂರು ನಗರದ ಮಾರುಕಟ್ಟೆ, ಹಾಪ್‌ ಕಾಮ್ಸ್‌ಗಳಲ್ಲಿ  ತರಕಾರಿಗಳ  ಬೆಲೆಗಳಲ್ಲಿ ಹೆಚ್ಚಳವಾಗಿದೆ. ಕೆಲವು ತರಕಾರಿಗಳನ್ನು ಹೊರತುಪಡಿಸಿದರೆ ಉಳಿದವುಗಳ ಬೆಲೆ 50 ರೂ. ದಾಟ...